ದೂರದ ಗೋವೆಯಿಂದ ವಧು ಬಂದಿತ್ತು
ಪ್ರಥಮ ನೋಟದಲೆನ್ನ ಮನವ ಗೆದ್ದಿತ್ತು.
ಕಣ್ಗಳೇ ಆಡಿದವು ನೂರಾರು ಮಾತು,
ಆಳವಾಗಿ ಬೇರೂರಿತು ಪ್ರೇಮ, ಹೃದಯಗಳು ಬೆರೆತು.
ಬಾಂಧವ್ಯಕೆ ಭಾಷೆಯ ಬಂಧನವಿಲ್ಲ
ಹಲವು ಭಾಷೆಗಳಲ್ಲಿ ಹರಿಯಿತು ಪತ್ರ ಪ್ರವಾಹ
ವ್ಯವಸ್ಥಿತ ಮದುವೆ ಆಯಿತು ಪ್ರೇಮ ವಿವಾಹ
ನಿಶ್ಚಿತದ ಬಳಿಕ ಉಳಿದಿದ್ದುದು
ನೂರು ದೀರ್ಘ ದಿನಗಳು, ಬರೆದುದು ನೂರೇ ಪತ್ರ!
ಇಬ್ಬರದೂ ಸೇರಿ ಸಾವಿರ ಪುಟಗಳು ಮಾತ್ರ
ಕಥೆ, ಕವನ, ಕನಸು, ಹಗಲುಗನಸು,
ನಾಟಕ, ರೂಪಕ, ಧಾರಾವಾಹಿ…
ಏನೆಲ್ಲ ರೂಪಗಳಲ್ಲಿ ಹರಿಯಿತು ಪತ್ರಧಾರೆ.
ದಿನ ದಿನವೂ ಕಾಯುತ್ತಿದ್ದೆವು ಪತ್ರಕ್ಕಾಗಿ
ರಾಮನಿಗಾಗಿ ಕಾದ ಶಬರಿಯಂತೆ
ಮಳೆಗಾಗಿ ಕಾದ ಚಾತಕ ಪಕ್ಷಿಯಂತೆ.
ಆಫೀಸಿನಲ್ಲಿ ಮನೆಯಲ್ಲಿ ಎಲ್ಲೆಲ್ಲೂ
ಅದೇ ಮಾತು – ಗುಲ್ಲೋ ಗುಲ್ಲು.
ಯಾರೂ ಆಗದ ಲಗ್ನ ಇವರೇ ಆದಂತೆ
ಎಂದವರ ಅಸೂಯಾಗ್ನಿಗೆ ತುಪ್ಪ ಹುಯ್ದಂತೆ
ಪತ್ರ ರೂಪದಿ ಭಾವಗಳು ಹೊರ ಹೊಮ್ಮಿ ಪಸರಿಸಿ
ವಿರಹ ವೇದನೆಯ ತಣಿಸಿತ್ತು
ಮನಕೆ-ಮನವ ತಲುಪಿಸಿತ್ತು
ಸುಂದರ ವೈವಾಹಿಕ ಜೀವನಕೆ
ಭದ್ರ ಬುನಾದಿಯ ಹಾಕಿತ್ತು
ಮಧುರ ಮಿಲನವು ಹೃದಯಗಳ ಬೆಸೆದಿತ್ತು
*****
೨೦-೦೩-೧೯೮೪
Related Post
ಸಣ್ಣ ಕತೆ
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
-
ಅಜ್ಜಿ-ಮೊಮ್ಮಗ
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…
-
ಎದಗೆ ಬಿದ್ದ ಕತೆ
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…
-
ಕೊಳಲು ಉಳಿದಿದೆ
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
-
ಹುಟ್ಟು
ಶಾದಿ ಮಹಲ್ನ ಒಳ ಆವರಣದಲ್ಲಿ ದೊಡ್ಡ ಹಾಲ್ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…